ಕರ್ನಾಟಕ ರಾಜ್ಯ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ರಿ) SJM ಪಾಲಿಬೆಟ್ಟ ರೇಂಜ್ ಸಮಿತಿ ಅಧೀನದ 15 ಮದ್ರಸಾಗಳ ಸದರ್ ಮುಅಲ್ಲಿಮರ ಸಂಗಮ ಮೇ 6ರಂದು ನೆಲ್ಲಿಹುದಿಕೇರಿ ದಾರುನ್ನಜಾತ್ ಸುನ್ನಿ ಮದ್ರಸಾದಲ್ಲಿ ಜರಗಿತು. SJM ಪಾಲಿಬೆಟ್ಟ ರೇಂಜ್ ಸಮಿತಿ ಅಧ್ಯಕ್ಷ ನೌಷಾದ್ ಝುಹ್ರಿ ರವರ ಅಧ್ಯಕ್ಷತೆಯಲ್ಲಿ SJM ಕೊಡಗು ಜಿಲ್ಲಾ ಟ್ರೈನಿಂಗ್ ಕಾರ್ಯದರ್ಶಿ ಹಸೈನಾರ್ ಮುಸ್ಲಿಯಾರ್ ಉದ್ಘಾಟಿಸಿದರು.

ಸದರ್ ಮುಅಲ್ಲಿಮರ ಜವಬ್ದಾರಿ, ಕಡತ ನಿರವಹಣೆ, ಮದ್ರಸಾ-ಕ್ಲಾಸ್ ರೂಂ ಸೆಟ್ ಅಪ್ ಸಂಬಂಧಿತ ವಿಷಯಗಳಲ್ಲಿ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಷ್ ಯೂಸುಫ್ ಸಖಾಫಿ ಬೊಳ್ಮಾರ್ ತರಗತಿ ಮಂಡಿಸಿದರು. ರೇಂಜ್ ವ್ಯಾಪ್ತಿಯ 15 ಮದ್ರಸಾಗಳ ಮುಅಲ್ಲಿಮರು ಪ್ರತಿನಿಧಿಗಳಾಗಿ ಭಾಗವಹಿಸಿದರು. SJM ಪಾಲಿಬೆಟ್ಟ ರೇಂಜ್ ಪ್ರಧಾನ ಕಾರ್ಯದರ್ಶಿ ಸಬಾಹ್ ಹಿಮಮಿ ಸಖಾಫಿ ಸ್ವಾಗತಿಸಿ ಕಾರ್ಯದರ್ಶಿ ಝುಬೈರ್ ಸಅದಿ ಅಲ್ ಅಫ್ಳಲಿ ವಂದಿಸಿದರು.




m
