ಅಹಮದ್ ಬದವಿ ಜುಮ್ಮಾ ಮಸೀದಿ ಸುಣ್ಣಮೂಲೆ ಇದರ ಗಲ್ಫ್ ಕಮೀಟಿ ಯ ವಾರ್ಷಿಕಮಹಾಸಭೆಯು ಕಮೀಟಿ ಗೌರವ ಅಧ್ಯಕ್ಷರಾದ ಇಬ್ರಾಹಿಂ ಶಾಲಿಮಾರ್ ಅವರ ನೇತೃತ್ವದಲ್ಲಿ ನಡೆಯಿತು.
ರಫೀಕ್ ಮಿಸ್ಬಾಹಿ ದುವಾ ನಿರ್ವಹಿಸಿದರು. ವಾರ್ಷಿಕ ಸಭೆಯು ಅಹಮದ್ ಬದವಿ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್ ನಾಸಿರ್ ಸಹದಿ ರರವರು ಉದ್ಘಾಟಿಸಿದರು.
ಸಿದ್ದೀಕ್ ಟಿಎ ಸ್ವಾಗತಿಸಿ, ಗತ ವರ್ಷದ ಲೆಕ್ಕ ಪತ್ರವನ್ನು ಕಾರ್ಯದರ್ಶಿ ಆಸೀಫ್ ಪಿಎ ಮಂಡಿಸಿದರು.
ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಟಿಎಂ ಪ್ರಾಸ್ತಾವಿಕ ಭಾಷಣ ಗೈದು ನಂತರ 2025 -26 ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.
ಗೌರವಾದ್ಯೇಕ್ಷರಾಗಿ ಅಬ್ದುಲ್ ರಹಿಮಾನ್ ಟಿಎಮ್ , ಅಧ್ಯಕ್ಷರಾಗಿ ಅಝೀಝ್ ಮೂಲೆ ,ಉಪಾಧ್ಯಕ್ಷ ರಾಗಿ ಲತೀಫ್ ಪಿಎ ,ಪ್ರದಾನ ಕಾರ್ಯದರ್ಶಿಯಾಗಿ ಆಸೀಫ್ ಪಿ ಏ ಜೊತೆ ಕಾರ್ಯದರ್ಶಿಗಳಾಗಿ ರಶೀಕ್ ಮೂಲೆ ಹಾಗೂ ಕೋಶಾಧಿಕಾರಿಯಾಗಿ ಬಾತಿಷಾ ಪೆರೋಳಿ ರವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಇಬ್ರಾಹಿಂ ಶಾಲಿಮಾರ್ ಮುಹಮ್ಮದ್ ರಫೀಕ್ ಜಿ , ಸುಲೈಮಾನ್ ಯಸ್ , ಫಾರೂಕ್ ಟಿಎ ಇಕ್ಬಾಲ್ ಟಿಎಮ್ ,ಸಿದ್ದೀಕ್ ಟಿಎ ,ನಾಸಿರ್ ಕೆಬಿ ರವರು ಅಯ್ಕೆ ಯಾದರು.




m

