Featured, ಅಂಕಣ, ಸ್ಥಳೀಯ

ಸುಳ್ಯ AVSS ಕಛೇರಿಯಲ್ಲಿ ಕುದ್ಮುಲ್ ರಂಗರಾವ್ ಜನ್ಮ ದಿನಾಚರಣೆ

 ದಲಿತೋದ್ಧಾರಕ,ಮಹಾ ಮಾನವತವಾದಿ,ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ರವರ ಜನ್ಮ ದಿನಾಚರಣೆಯನ್ನು ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ನಿ.ಸುಳ್ಯದ ಕಛೇರಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮ ಪ್ರಮುಖರಾಗಿ. ಮನೋ ಶಾಸ್ತ್ರಜ್ಞರಾದ ಮೈಸೂರು ಜಿಲ್ಲೆಯ ಟಿ ನರಸೀಪುರದ ದೇವರಾಜ್ ಸೋಸಲೆಯವರು ಭಾಗವಹಿಸಿದರು. ಪ್ರಮುಖ ಭಾಷಣವನ್ನು ದಿಲ್ಲಿ ಲಾ ಕಾಲೇಜಿನ ವಿದ್ಯಾರ್ಥಿ ಸುದರ್ಶನ ಕಡಬ ಮಾಡಿದರು. ವೇದಿಕೆಯಲ್ಲಿ AVSS ಸುಳ್ಯ ಶಾಖೆ ಉಪಾಧ್ಯಕ್ಷರಾದ ಚೋಮಗಾಂಧಿನಗರ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪ್ರಮುಖರಾದ,ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ.ಪಲ್ಲತ್ತಡ್ಕ, AVSS ಸುಳ್ಯ ಶಾಖೆಯ ನಿರ್ದೇಶಕರುಗಳಾದ,ಮನೋಹರ ಪಿ.ಬಿ.ಪಲ್ಲತ್ತಡ್ಕ,ಹರೀಶ್ ಎಂ.ಎಸ್.ಮೇನಾಲ,ಸುಂದರ ಬಿ.ಕೆ ಬಾಡೇಲು,ಪ್ರಕಾಶ್ ಪಿ.ನಾಯ್ಕ ಕಲ್ಲಗುಡ್ಡೆ ಹಾಗೂ ಸತೀಶ್ ಬೂಡುಮಕ್ಕಿ,ಸುನೀಲ್ ಗಂಧದ ಗುಡ್ಡೆ,ಸುಳ್ಯ ನಗರ ಪಂಚಾಯತ್ ಸಿಬ್ಬಂದಿಗಳಾದ ಶ್ರವಣ್ ಕುಮಾರ್ ಕೊಡಿಯಾಲಬೈಲು ಬಿಜಿಲಾ ಸುಳ್ಯ ,ಜಯಂತ ಮೇನಾಲ ಇದ್ದರು ಅಧ್ಯಕ್ಷತೆಯನ್ನು AVSS ಸುಳ್ಯ ಶಾಖೆಯ ಅಧ್ಯಕ್ಷರಾದ ಕರುಣಾಕರ ಪಿ.ಆರ್.ವಹಿಸಿದ್ದರು.

m

Related Posts