ಸುಳ್ಯ : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ತೆಕ್ಕಿಲ್ ವಿದ್ಯಾಸಂಸ್ಥೆಯ ಸ್ಥಾಪಕರು, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಅಪಾರವಾಗಿ ತೊಡಗಿಸಿಕೊಂಡಿರುವ, ಹಲವಾರು ಪ್ರಶಸ್ತಿ ಗಳಿಗೆ ಭಾಜನರಾದ, ಜನಪ್ರತಿನಿಧಿ ಅಲ್ಲದಿದ್ದರೂ ಸಾರ್ವಜನಿಕ ಸೇವೆಗಾಗಿ ಸರಕಾರದಿಂದ ಹಲವು ಕೋಟಿ ಅನುದಾನವನ್ನು ತರಲು ಯಶಸ್ವಿಯಾದ ಸದಾ ಜನರೊಂದಿಗೆ ಸರಳತೆಯಲಿ ಬೆರೆಯುವ ಜನಸೇವಕ,ಜನನಾಯಕ ಟಿ.ಎಂ ಶಹೀದ್ ತೆಕ್ಕಿಲ್ ರವರಿಗೆ ಅರ್ಹವಾಗಿ ಕರ್ನಾಟಕ ಸರ್ಕಾರದಿಂದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸುಳ್ಯದ ಹಲವು ಕಾರ್ಮಿಕ ಸಂಘಟನೆ ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಾರ್ವಜನಿಕ ಅಭಿನಂದನೆ ಕಾರ್ಯಕ್ರಮ ದಿನಾಂಕ 11/10/2025 ನೇ ಶನಿವಾರ ಸಂಜೆ 4.00 ಗಂಟೆಗೆ ಸುಳ್ಯ ನಗರ ಪಂಚಾಯತ್ ಬಳಿ ಇರುವ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರು ಇವಾರ್ತೆಗೆ ತಿಳಿಸಿದ್ದಾರೆ

ಆಕ್ಟೋಬರ್ 11 ರಂದು ನಡೆಯುವ ಕಾರ್ಯಕ್ರಮಗಳ ವಿವರ
ಪೂರ್ವಾಹ್ನ 10.00 ಗಂಟೆಗೆ: ಸಂಪಾಜೆ ಚೆಕ್ಪೋಸ್ಟ್ ಬಳಿ ಟಿ.ಎಂ ಶಹೀದ್ರವರಿಗೆ ಭವ್ಯ ಸ್ವಾಗತ.
ನಂತರ ಪೇರಡ್ಕ ದರ್ಗಾ ಶರೀಫ್, ಸವರೇಪುರ ಚರ್ಚ್ ಕಲ್ಲುಗುಂಡಿ, ಮಹಾ ವಿಷ್ಣು ಮೂರ್ತಿ ದೈವಸ್ಥಾನ ಮತ್ತು ಶ್ರೀ ಮುತ್ತು ಮಾರಿಯಮ್ಮ ದೈವಸ್ಥಾನಗಳಿಗೆ ಧಾರ್ಮಿಕ ಭೇಟಿ.
ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ನಿರ್ಮಾಣಗೊಂಡ ಹೈಮಾಸ್ಟ್ ದೀಪಗಳ ಉದ್ಘಾಟನೆ.
ಪೂರ್ವಾಹ್ನ 11.00 ಗಂಟೆಗೆ: ಸಂಪಾಜೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಅಭಿನಂದನಾ ಕಾರ್ಯಕ್ರಮ.
ಅಪರಾಹ್ನ 12.30 ಗಂಟೆಗೆ: ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಹಾಗೂ ಅರಂತೋಡು ಮತ್ತು ಪೆರಾಜೆ ಪ್ರದೇಶದ ಸಾರ್ವಜನಿಕರೊಂದಿಗೆ ಸಂವಾದ.
ಅಪರಾಹ್ನ 3.30 ಗಂಟೆಗೆ: ಸುಳ್ಯಕ್ಕೆ ಆಗಮನ.
ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಕಾಂಗ್ರೆಸ್ ಕಚೇರಿಗೆ ಭೇಟಿ.
ಸಂಜೆ 4.00 ಗಂಟೆಗೆ: ಲಯನ್ಸ್ ಸೇವಾ ಸದನದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ





m

