ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) KMJ, SჄS, SSF ಗಾಂಧಿನಗರ ಯುನಿಟ್ ವತಿಯಿಂದ ಭಾರತದ 76ನೇಯ ಗಣರಾಜೋತ್ಸವ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು. ಕೆ.ಎಂ.ಜೆ ಗಾಂಧಿನಗರ ಯುನಿಟ್ ಅಧ್ಯಕ್ಷರಾದ ಅಬೂಬಕ್ಕರ್ ಜಟ್ಟಿಪಳ್ಳ ಧ್ವಜಾರೋಹಣಗೈದರು. ಗಾಂಧಿನಗರ ಮದ್ರಸಾ ಸದರ್ ಮುಅಲ್ಲಿಂ ಸಿರಾಜುದ್ದೀನ್ ಸಖಾಫಿ ದುಆಗೈದರು. ರಿಯಾನ್ ಸಅದಿ ಬೆಳ್ಳಾರೆ ಸಂದೇಶ ಭಾಷಣಗೈದರು. ಎಸ್ಸೆಸ್ಸೆಫ್ ಗಾಂಧಿನಗರ ಯುನಿಟ್ ಅಧ್ಯಕ್ಷ ಫಯಾಝ್ ಮಾಂಬ್ಳಿ ಕಾರ್ಯಕ್ರಮ ನಿರೂಪಿಸಿ ನೌಶಾದ್ ಕೆರೆಮೂಲೆ ಸ್ವಾಗತಿಸಿ ವಂದಿಸಿದರು.
ಸುಳ್ಯ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷರಾದ ಮುಹಮ್ಮದ್ ಕೆ.ಎಂ.ಎಸ್, ಅಬ್ದುಲ್ ಮಜೀದ್ ಕೆ.ಬಿ , ಅಬ್ದುಲ್ ಹಮೀದ್ ಬೀಜಕೊಚ್ಚಿ, ಸಿದ್ದೀಕ್ ಕಟ್ಟಕ್ಕಾರ್ ಅಬೂಬಕ್ಕರ್ ಎಸ್.ಪಿ, ಹಾರಿಸ್ ಸಿ.ಎ ಬೋರುಗುಡ್ಡೆ , ಅಬ್ದುಲ್ಲ ಫಾಜ್, ಹನೀಫ್ ಸಖಾಫಿ ಬೆಳ್ಳಾರೆ, ಫೈಝಲ್ ಕಟ್ಟೆಕ್ಕಾರ್, ಸಮದ್ ಹಾಜಿ ಕಲ್ಲಪಳ್ಳಿ, ನಾಸಿರ್ ಕಮ್ಮಾಡಿ, ಶಮೀರ್ ಮೊಬೈಲ್ ಹಾರ್ಟ್, ಸಿದ್ದೀಕ್ ಬಿ.ಎ , ಮತ್ತಿತ್ತರು ಭಾಗವಹಿಸಿದರು.




m
